ಮುಟ್ಟಿದರೆ ಮುನಿಯೂ, ಕನಕಾಂಬರ ಬೀಜವೂ

ಅರಳಲೋ ಬೇಡವೋ
ಎಂದನುಮಾನಿಸುತ್ತಲೇ
ಎಲೆದಳದಳಗಳ ಅರ್ಧವಷ್ಟೇ
ಮೆಲ್ಲಗೆ ವಿಕಸಿಸಿ
ಯಾರ ದಿಟ್ಟಿಗೂ ತಾಗದಿದ್ದರೆ
ಸಾಕೆನುತ
ಮೈಮನಗಳನೆಲ್ಲ ಮುದುರಿಸಿ
ದೇಹವೂ ನಾನೇ ಆತ್ಮವೂ ನಾನೇ
ಬಚ್ಚಿಡಲೆಂತು ಎರಡನೂ
ಪರಕೀಯ ದಾಳಿಯಿಂದ?
ಕಳವಳದಿಂದ
ಸಣ್ಣ ತಾಗುವಿಕೆಗೂ
ಮೈಮನಗಳ ಇಂಚಿಂಚೂ
ಒಳಗೊಳಗೇ ಮುದುರಿಕೊಳ್ಳುತಾ
ಬದುಕಿಡೀ ಚಡಪಡಿಸುತಾ
ಕಳೆವ ತುಡುಮುಡಿಕೆ ಜೀವ
ಈ ಮುಟ್ಟಿದರೆ ಮುನಿಯದು!

ಧ್ಯಾನಕ್ಕೆ ಕೂತು
ಆಳದಾಳದ ಮೌನದಲಿ ಹೂತು
ಬಿರುಬಿಸಿಲಿಗೆ ಹೊರ ಮೈ
ಒಣಗಿಸಿ
ಕಾವಿನಲಿ ಒಳಗು ಮಾಗಿಸಿ
ದೇಹ ನಾನಲ್ಲ. ಆತ್ಮ ನಾನು
ದೇಹಕ್ಕೂ ನನಗೂ
ಸಂಬಂಧವಿಲ್ಲೆನುತ
ಸಣ್ಣ ತಾಗುವಿಕೆಗೇ
ಪಟ್ಟನೆ ಒಡೆದು
ತಟ್ಟನೆ ಸಿಡಿದು
ಬಿರಿದುದುರಿದರೂ
ಒಳಗಿನದೆಲ್ಲಾ ಶುಭ್ರ
ಮಡಿಮಡಿ ಬಿಳುಪೆಂಬ
ಸಮಜಾಯಿಷಿಯಲಿ
ಮತ್ತೆ ಹಸಿಮಣ್ಣಲಿ ಹೂತು
ಧನ್ಯತೆಯ ಪಡೆವ ತವಕ
ಕಾದು ಕುಳಿತ
ಕನಕಾಂಬರ ಬೀಜದ್ದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕಿದ್ದಾರೆ
Next post ಪಾಪ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys